ನಮ್ಮ ಸೈನಿಕರು

THIS STORY IS DEDICATED TO INDAIN ARMY
ನಮ್ಮ ಸೈನಿಕರು 
ಇದು ಎರಡು ಸೈನಿಕರ ಕಥೆಯಾಗಿದ್ದು ಇಬ್ಬರು ಒಂದೇ ಟೀಮ್ ಅಲ್ಲಿ ಇದ್ದರು. ತಮ್ಮ ಕಷ್ಟಸುಖಗಳನ್ನ ಹಂಚಿಕೊಳ್ಳುತಿದ್ದರು. ದಿನ ನಿತ್ಯದಂತೆ ಅವರ ಕೆಲಸ ಗಡಿ ಕಾಯುವುದು ಆಗಿತ್ತು. ಒಬ್ಬರಿಗೆ ಮದುವೆ ಆಗಿತ್ತು ಇನ್ನೊಬ್ಬರು ಯುವಕರಾಗಿದ್ದರು. ಸೈನಿಕರಂದರೆ ಹಾಗೆ ಅಲ್ವ ತಮ್ಮ ಸಂಸಾರ ಬಿಟ್ಟು ದೂರ ಇದ್ದು ಭಾರತ ಮಾತೆಯ ಸುರಕ್ಷತೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಡುವವರು ದೇಶದ ಜನರನ್ನು ಕಾಪಾಡುವವರು. ಆಗಾಗ ಮನೆಯವರೊಂದಿಗೆ ಫೋನ್ ಮೂಲಕ ಮಾತು ಅಷ್ಟೇ. ಚಳಿ ಬಿಸಿಲು ಯಾವುದು ಲೆಕ್ಕಕ್ಕಿಲ್ಲ ದೇಶದ ರಕ್ಷಣೆ ಒಂದೇ ಧೇಯಾ. ಇವರಿಗೆ ಸ್ವಲ್ಪ ದಿನದ ಮಟ್ಟಿಗೆ ರಜೆ ಸಿಕ್ಕಿತ್ತು ಇಬ್ಬರು ಅವರವರ ಊರಿಗೆ ಸಂತೋಷದಿಂದ ಹೋದರು. ಮನೆಯವರ ಜೊತೆಗೆ ಖುಷಿಯಿಂದ ಇದ್ದರು. ಅದರಲ್ಲೂ ಮದುವೆ ಅದ ಯೋಧನಿಗೆ ತುಂಬಾ ಸಂತೋಷ ಯಾಕಂದರೆ ಅವರ ಹೆಂಡತಿಗೆ ೮ ತಿಂಗಳು ತುಂಬಿತ್ತು. ಮತ್ತು ಇನ್ನೊಬ್ಬ ಯೋಧನಿಗೂ ಖುಷಿ ತನ್ನ ಪ್ರೇಯಸಿ ನೋಡಿದ ಖುಷಿ ಮತ್ತು ಮನೆಯಲ್ಲಿ ಮದುವೆ ನಿಶ್ಚಯ ಆಗಿತ್ತು. ಇವರಿಬ್ಬರು ದೇಶದ ಮೇಲೆ ತುಂಬಾನೇ ಪ್ರೀತಿ ಹೊಂದಿದ್ದರು. ಶಿಸ್ತು ಅನ್ನೋದು ಇವರ ರಕ್ತದಲ್ಲೇ ತುಂಬಿತ್ತು. ಇಷ್ಟೆಲ್ಲಾ ಖುಷಿಯಗಿರುವಾಗ ಇವರಿಗೊಂದು ಕಾಲ್ ಬರುತ್ತೆ. ಗಡಿಯಲ್ಲಿ ಯುದ್ಧ ನಡಿಯುತ್ತಿದೆ, ಉಗ್ರರು ದೇಶದ ನೆಮ್ಮದಿ ಹಾಳುಮಾಡಲು ಒಳನುಸುಳಲು ಹೊಂಚು ಹಾಕುತ್ತಿದ್ದಾರೆ ನಿಮ್ಮ ಕರ್ತವ್ಯ ಬೇಕಾಗಿದೆ ತಕ್ಷಣ ಹೊರಟು ಬನ್ನಿ ಅಂತ. ಅಷ್ಟರಲ್ಲಿ ಎರಡು ಮನೆಯವರ ಕಣ್ಣಲ್ಲಿ ನೀರು ದುಃಖದ ಮುಖ. ಕಳುಹಿಸಿಕೊಡಲು ಹಿಂದೇಟು. ಮೊದಲನೇ ಯೋಧ ಹೆಂಡತಿ ತಾಯಿ ತಂದೆ ಮನೆಯವರನ್ನು ನೋಡಿ ಹೀಗೆಂದ, "ನೀವೇಕೆ ದುಃಖದಲ್ಲಿದ್ದ್ದಿರಿ ಇದು ಸರಿಯಲ್ಲ. ಅಮ್ಮ ಅಪ್ಪ ಮತ್ತು ನನ್ನ ಮಡದಿ ನೀವು ನನಗೆ ಎಷ್ಟು ಮುಖ್ಯಾನೋ ನಿಮ್ಮ ಮೇಲೆ ಎಷ್ಟು ಪ್ರೀತಿ ನನಗಿದೆಯೋ ಅಷ್ಟೇ ಪ್ರೀತಿ ಭಾರತ ಮಾತೆಯ ಮೇಲಿದೆ. ನಿಮಗೆ ಏನಾಗೋದನ್ನು ನನಗೆ ನೋಡಲು ಅಗಲ್ವೋ ಹಾಗೆ ನಮ್ಮ ತಾಯಿ ಭಾರತಾಂಬೆಗೆ ಏನಾಗೋದನ್ನು ನೋಡಲು ಆಗಲ್ಲ. ನಾನು ದೇಶಕೊಸ್ಕರ ಹೊರಾಡುತ್ತಿರುವವನು ಅದಕ್ಕೆ ಹೆಮ್ಮೆ ಪಡಿ ನಿಮ್ಮ ಕಣ್ಣಲ್ಲಿ ಯಾವತ್ತು ಕಣ್ಣಿರು ಬರಬಾರದು. ಹೆಮ್ಮೆ ಪಡಿ ನಿಮ್ಮ ಮಗ ನಿಮ್ಮ ಗಂಡ ಭಾರತಾಂಬೆಯ ರಕ್ಷಣೆ ಮಾಡುತ್ತಿದ್ದಾನೆ ಪ್ರತಿಕ್ಷಣ ಅಂತ. ನಿಮ್ಮ ಮಗುವಿಗೆ ಹೇಳಿ ನಿಮ್ಮ ಅಪ್ಪ ದೇಶಕೊಸ್ಕರ ಹೋರಾಡುತಿದ್ದಾರೆ ಅಂತ ಗರ್ವದಿಂದ ಹೇಳಿ. ನನ್ನ ಖುಷಿಯಿಂದ ಕಳುಹಿಸಿ" ಅನ್ನುತ್ತಾನೆ. ಹೆತ್ತವರು ಖುಷಿಯಿಂದ ಅಶಿರ್ವದಿಸುತ್ತಾರೆ. ಮಡದಿ ಖುಷಿಯಿಂದ ಕಳುಹಿಸಿ ಕೊಡುತ್ತಾಳೆ. ಇನ್ನೊಬ್ಬ ಯೋಧರನ್ನು ಖುಷಿಯಿಂದ ಕಳುಹಿಸುತ್ತಾರೆ. ಹೋಗುವಾಗ ತನ್ನ ಪ್ರೇಯಸಿಗೆ ಹೇಳುತ್ತಾರೆ ನಾನು ಹೋಗಿಬರುತ್ತೇನೆ ಅಂತ ತಕ್ಷಣ ಪ್ರೇಯಸಿ ಹೇಳುತ್ತಾಳೆ ಪ್ರೀತಿಯಿಂದ ಭಾರತಾಂಬೆಯ ರಕ್ಷಿಸಲು ಹೋಗುತಿದ್ದಿರಿ ನನಗಿದೋ ಹೆಮ್ಮೆ ಇದೆ. ನಿಮಗಾಗಿ ಏಳು ಜನುಮ ಬೇಕಾದರೂ ಕಾಯುತ್ತೇನೆ. ನಿಮ್ಮ ದೇಹದಲ್ಲಿ ಕೊನೆಹನಿ ರಕ್ತ ಇರೋವರೆಗೂ ದೇಶಕ್ಕೆ ಅಡ್ಡ ಬಾರೋ ಯಾರನ್ನು ಬಿಡಬೇಡಿ ಹೋಗಿಬನ್ನಿ ಅಂದು ಕಳುಹಿಸುತ್ತಾಳೆ. 
ಇಬ್ಬರು ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಪರಿಸ್ತಿತಿ ತುಂಬಾ ಗಂಭಿರವಾಗಿರುತ್ತೆ. ಸಾಕಷ್ಟು ಸೈನಿಕರಿಗೆ ಗಾಯಗಳಾಗಿರುತ್ತೆ ಪ್ರಥಮ ಚಿಕಿತ್ಸೆಗೆ ಕರೆತರಲಾಗಿರುತ್ತೆ. ಅದರಲ್ಲೂ ರಕ್ತದ ಮಡುವಿನಲ್ಲಿ ಬಿದ್ದಿರೋ ಒಬ್ಬ ಸೈನಿಕ ಹೇಳುತ್ತಾನೆ, ದೇಶದ ಬಾವುಟ ಹಾರುತ್ತಿರಬೇಕು ಗಡಿನುಸುಳೋ ನಾಯಿಗಳಿಗೆ ತಕ್ಕ ಪಾಟ ಕಲಿಸಬೇಕು ನಾನು ಸತ್ತರು ಕೊನೆಪಕ್ಷ ಹತ್ತು ಉಗ್ರರನ್ನ ಕೊಂದೆ ಹೋಗುತ್ತೇನೆ ಬೇಗ ಪ್ರಥಮ ಚಿಕಿತ್ಸೆ ಮಾಡಿ ನನ್ನ ಉಸಿರು ಇನ್ನು ಇದೆ ಅಂತ. ಇದನ್ನ ಕೇಳಿದ ಉಳಿದ ಯೋಧರ ಛಲ ದುಗುಣವಾಯಿತು. ಒಂದೇ ಮಾತರಂ ಗೋಷಣೆ ಹಾಕುತ್ತ ಗಡಿಯತ್ತ ಹೊರಟರು. ಅದರಲ್ಲಿ ಇವರಿಬ್ಬರು ಇದ್ದರು. ಹೋಗುವಾಗ ಯುವ ಯೋಧ ಕೇಳಿದನು ಸರ್ ಈ ಯುದ್ಧದಲ್ಲಿ ನಿಮಗೇನಾದರೂ ಆದರೆ ? ಅದಕ್ಕೆ ಉತ್ತರಿಸುತ್ತ ನಗುಮುಖದಲ್ಲೇ ಹೇಳಿದರು ನಮ್ಮ ಮನೆಯಲ್ಲಿ ಎಲ್ಲಾರಿಗೂ ಹೆಮ್ಮೆ ಇದೆ ನನ್ನ ಮೇಲೆ. ಇನ್ನೊಂದು ವಿಷಯ ಇನ್ನು ಸ್ವಲ್ಪದಿನದಲ್ಲಿ ದೇಶವ ಕಾಯೋ ಇನ್ನೊಂದು ಜೀವ ಹುಟ್ಟುತ್ತೆ. ಆದರೆ ಇಂದು ಭಾರತಾಂಬೆಯ ಋಣ ತಿರಿಸೋ ಸಮಯ ಬಂದಿದೆ. ಈ ತಾಯಿಗೆ ಒಂದಿಂಚು ಏನಾಗಲು ಬಿಡಲ್ಲ. ನನ್ನ ಉಸಿರು ಹೋದರು ಭಾರತಾಂಬೆಯ ಮಡಿಲಲ್ಲಿ ಅದು ಭಾರತಾಂಬೆಯ ಜೈಕಾರದೊಂದಿಗೆ. ಅಷ್ಟರಲ್ಲಿ ಯುವ ಯೋಧ ಹೇಳುತ್ತಾನೆ ಸರ್ ನನ್ನ ಮನೆಯಲ್ಲೂ ಎಲ್ಲಾರಿಗೂ ಹೆಮ್ಮೆ ಇದೆ. ನನ್ನ ಮದುವೆ ಸಹ ಗೊತ್ತಾಗಿದೆ. ನನ್ನ ಪ್ರೇಯಸಿ ಹೋಗುವಾಗ ಹೆಮ್ಮೆ ಇಂದಲೇ ಹೇಳಿದ್ದಾಳೆ ಕೊನೆರಕ್ಥ ಇರುವವರೆಗೂ ಹೊರಡು ಏಳೇಳು ಜನುಮವು ಕಾಯುತ್ತಿರುತ್ತೇನೆ ಅಂತ. ನಾನು ಗರ್ವದಿಂದ ಹೇಳುತ್ತೇನೆ ನಾನೊಬ್ಬ ರಕ್ಷಕ. ಇವನ ಮಾತುಗಳನ್ನು ಕೇಳಿ ತುಂಬಾ ಖುಷಿ ಆಗುತ್ತೆ. ಗಡಿ ಹತ್ತಿರ ಬರೋವಾಗ ಇವರಿಗೆ ನ್ಯೂಸ್ ಬರುತ್ತೆ ಗಡಿಯಲ್ಲಿ 100 ಜನ ಉಗ್ರರು ದಾಳಿ ಮಾಡುತ್ತಿದ್ದಾರೆ ಅಂತ ಆದರೆ ಇಲ್ಲಿ 20 ಸೈನಿಕರು ಇದ್ದರು. ಅಷ್ಟರಲ್ಲಿ ಮೊದಲನೇ ಸೈನಿಕ ಟೀಮ್ ಗೆ ಹೇಳುತ್ತಾರೆ. ಕೇಳಿ ನೀವು ಒಬ್ಬಬ್ಬರು ನೂರು ಜನಕ್ಕೆ ಸಮಾನ ಅಂದರೆ ಅಲ್ಲಿರುವುದು ಕೇವಲ ನೂರು ಜನ ನಾವು 20 ಜನ ಅಲ್ಲ 2000 ಜನ ಅಂದರೆ ನಮ್ಮ ಶಕ್ತಿ ಮುಂದೆ ಅವರೇನು ಅಲ್ಲ. ನಮ್ಮ ಕೊನೆ ಉಸಿರಿರುವರೆಗೂ ದೇಶದ ರಕ್ಷಣೆ ಮಾಡಬೇಕು. ಅಷ್ಟರಲ್ಲೇ ಎಲ್ಲಾರು ಒಟ್ಟಾಗಿ ಭಾರತಾಂಬೆಗೆ ಜೈಕಾರ. ಹೊರಡಲು ಸಜ್ಜಾದರು. ಬಂದೂಕುಗಳನ್ನ ಹಿಡಿದು ಉಗ್ರರ ಕಡೆಗೆ ಪ್ರತಿ ದಾಳಿ ಮಾಡಿದರು. ಮದ್ಯ ರಾತ್ರಿಯೇ ಆಯಿತು ಇದ್ದ 20 ಸೈನಿಕರಲ್ಲಿ 10 ಸೈನಿಕರು ಹೋರಾಟದಲ್ಲಿ ಅಮರರಾದರು. ಇನ್ನುಳಿದ 6 ಜನ ಗಂಬಿರ ಗಾಯಗಳಿಂದ ಬಿದ್ದಿದ್ದರು. ಸಣ್ಣ ಪುಟ್ಟ ಗಾಯಗಳೊಂದಿಗೆ ಇವರಿಬ್ಬರು ಹೋರಡುತಿದ್ದರು. ಅಷ್ಟರಲ್ಲಿ ಯುವ ಯೋಧನ ಕಾಲಿಗೆ ಗುಂಡೇಟು ಬಿದ್ದಿತು. ಆದರು ನೋವನ್ನು ಮರೆತು ಹೋರಾಡುತಿದ್ದರು. ಸೇನೆಯಿಂದ ಒಂದು ಮೆಸೇಜ್ ಬಂತು ಉಗ್ರರು ಕಣಿವೆ ಕಡೆಯಿಂದ ಒಳ ಬರಲು ನೋಡುತಿದ್ದರೆ. ಎಲ್ಲಾರು ಗುಂಪಲ್ಲಿದ್ದರೆ ಅಂತ. ಆದರೆ ಇಲ್ಲಿ ಎಲ್ಲ ಸೈನಿಕರು ಗಾಯಗಳಿಂದ ಬಳಲುತಿದ್ದರು. ಸಾಕಷ್ಟು ಸೈನಿಕರು ವೀರ ಮರಣ ಹೊಂದಿದ್ದರು. ಅಗಾ ಕಣ್ಣಿರು ಹಾಕುತ್ತ ಯುವ ಯೋಧ ಸರ್ ಈಗೇನು ಮಾಡುವುದು ತಾಯಿಯ ರಕ್ಷಣೆ ಹೇಗೆ ಮಾಡುವುದು, ಉಗ್ರರ ಮುಂದೆ ತಲೆ ತಗ್ಗಿಸಲು ಕನಸಲ್ಲೂ ಒಪ್ಪಲ್ಲ. ಸರ್ ಈಗೇನು ಮಾಡುವುದು. ಅದಕ್ಕೆ ಮೊದಲ ಸೈನಿಕ ಹೇಳುತ್ತಾನೆ, ನಮ್ಮ ಉಸಿರು ಇನ್ನು ಇದೆ ಅಂತ ಘಟನೆ ಸಂಭವಿಸಲು ನಾನು ಬಿಡಲ್ಲ. ತನ್ನ ಬ್ಯಾಗ್ ಅಲ್ಲಿದ್ದ ಭಾವುಟವನ್ನು ಕೊಟ್ಟು ಹೇಳಿದ ಒಂದು ಮಾತು ನನ್ನ ಮನೆಯವರು ನನ್ನ ಹೆಂಡತಿ ಸಿಕ್ಕರೆ ಹೇಳು "ನಿಮ್ಮ ಮಗ ನಿಮ್ಮ ಗಂಡ ದೇಶದ ರಕ್ಷಣೆಗೆ ತನ್ನ ಪ್ರಾಣ ಬಲಿಕೊಟ್ಟರು. ಆದರೆ ಯೂವುದೇ ಕೆಟ್ಟ ಕಾರ್ಯಕ್ಕಲ್ಲ ಕಣ್ಣಲ್ಲಿ ನೀರು ಬಿಳಿಸಬೇಡಿ ಬದಲು ಗರ್ವದಿಂದ ಹೆಮ್ಮೆಪಡಿ ಮತ್ತು ನನ್ನ ಮಗುವಿಗೆ ದೇಶ ರಕ್ಷಣೆಗೆ ಸಜ್ಜಾಗಲು ಹೇಳಿ". ಇದನ್ನು ಕೇಳಿದ ಯುವ ಯೋಧ ಹೇಳಿದ ಸರ್ ನಿಮ್ಮ ನೋಡಿ ದೇಶವೇ ಹೆಮ್ಮೆ ಪಡುತ್ತೇ ನಾನು ಹೆಮ್ಮೆ ಪಡುತ್ತೇನೆ. ಸರ್ ನಾವು ಕೊನೆ ಉಸಿರಿರುವರೆಗೂ ಹೊರಡುವ ಅಂದ. ಆದರೆ ಮೊದಲನೇ ಸೈನಿಕ ಭಾರತ ಮಾತೆಗೆ ತಲೆ ಬಾಗುತ್ತಾ ಮಣ್ಣಿಗೆ ಚುಂಬಿಸುತ್ತ ಬಾಂಬ್ ಗಳನ್ನು ತನ್ನ ದೇಹಕ್ಕೆ ಸುತ್ತಿಕೊಂಡು ಅಮ್ಮ ನಿನ್ನ ಮಗನಾಗಿ ನಾನು ಗರ್ವಪಡುತಿದ್ದೇನೆ ನನ್ನವರನ್ನು ನನ್ನ ದೇಶವನ್ನು ನನ್ನ ಕುಟುಂಬವನ್ನು ಕಾಪಾಡು ಅಂತೇಳಿ ಇಲ್ಲಿ ಗಾಯಗಳಿಂದ ಬಿದ್ದ ಯೋಧರ ಕಡೆಗೆ ಸಲ್ಯೂಟ್ ಹಾಕುತ್ತ ಬಂದೂಕು ಚಲಾಯಿಸುತ್ತಾ ಉಗ್ರರಿದ್ದ ಕಣಿವೆ ಕಡೆಗೆ ಓಡಿದರು ಸಾಕಷ್ಟು ಗುಂಡು ತಗುಲಿದರೂ ತನ್ನ ಗುರಿ ಸಾದಿಸಲು ಉಸಿರು ಬಿಗಿ ಹಿಡಿದಿದ್ದರು. ಕಣಿವೆ ಕಡೆಗೆ ಓಡಿ ಬಿದ್ದು ಸತ್ತವಾರಗೆ ನಟಿಸಿದರು ಎಲ್ಲಾ ಉಗ್ರರು ಖುಷಿಯಿಂದ ಈ ಯೋಧರ ಸುತ್ತ ಸುತ್ತಿದರು. ಒಮ್ಮೆಲೇ ಎಚ್ಚೆತ್ತ ಯೋಧ ಜೈ ಭಾರತ್ ಮಾ ತುಜೆ ಸಲಾಂ ಅಂತ ಹೇಳಿ ರಿಮೋಟ್ ಬಟನ್ ಒತ್ತಿಬಿಟ್ಟರು. ಎಲ್ಲಾ ಉಗ್ರರು ಅಲ್ಲೇ ಸತ್ತು ಹೋದರು. ಈ ಯೋಧ ವೀರ ಮರಣ ಹೊಂದಿದರು. ಕೊನೆಗೆ ದೇಶವನ್ನು ಉಳಿಸಿದರು ತನ್ನ ಜೀವವನ್ನು ಬಲಿಕೊಟ್ಟು.........
ಪ್ರತಿಯೊಬ್ಬ ಸೈನಿಕನಿಗೂ ನಮ್ಮದೊಂದು ಸಲ್ಯೂಟ್ .. ಜೈ ಹಿಂದ್
 by Puttaheart

No comments:

Post a Comment